ಮೈಸೂರು: ಬೆಂಗಳೂರಿನ ಉಜ್ವಲ್ ಸಿ ನಾಯ್ಡು ಮತ್ತು ಪಿ.ಎಸ್.ಶ್ರೀವರ್ಷಿಣಿ ಅವರು ದಸರಾ ಅಂಗವಾಗಿ ನಡೆಯುತ್ತಿರುವ ಜಿಮ್ನಾಸ್ಟಿಕ್ಸ್ ಕೂಟದ ಆರ್ಟಿಸ್ಟಿಕ್ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಆಲ್ರೌಂಡ್ ವಿಭಾಗದಲ್ಲಿ ಚಾಂಪಿಯನ್ ಆದರು.
ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಉಜ್ವಲ್ ಅವರು 77.6 ಪಾಯಿಂಟ್ ಕಲೆಹಾಕಿದರು. 69.7 ಪಾಯಿಂಟ್ ಕಲೆಹಾಕಿದ ಧಾರವಾಡದ ಅಮೃತ್ ಎರಡನೇ ಸ್ಥಾನ ಹಾಗೂ ಬೆಂಗಳೂರಿನ ಉದಯ್ ಸಿ ನಾಯ್ಡು (64) ಮೂರನೇ ಸ್ಥಾನ ಪಡೆದುಕೊಂಡರು.
ಮಹಿಳೆಯರ ವಿಭಾಗದಲ್ಲಿ ಶ್ರೀವರ್ಷಿಣಿ 42.07 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನ ಗಳಿಸಿದರು. ಆರ್ಟಿಸ್ಟಿಕ್ ಮತ್ತು ಏರೊಬಿಕ್ಸ್ ಜಿಮ್ನಾಸ್ಟಿಕ್ಸ್ನಲ್ಲಿ ಬೆಂಗಳೂರಿನ ಸ್ಪರ್ಧಿಗಳು ಪ್ರಾಬಲ್ಯ ಮೆರೆದರು.
ಫಲಿತಾಂಶ ಹೀಗಿದೆ: ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್: ಪುರುಷರ ವಿಭಾಗ: ಉಜ್ವಲ್ ಸಿ ನಾಯ್ಡು (ಬೆಂಗಳೂರು, 77.6 ಪಾಯಿಂಟ್)–1, ಅಮೃತ್ (ಧಾರವಾಡ, 69.7), ಉದಯ್ ಸಿ ನಾಯ್ಡು (ಬೆಂಗಳೂರು, 64)–3
ತಂಡ ವಿಭಾಗ: ಬೆಂಗಳೂರು (328.24)–1, ಧಾರವಾಡ (320.24)–2, ತುಮಕೂರು (275.75)–3