ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 31–01–2021ರಿಂದ 06–02– 2021ರವರೆಗೆ

ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ,ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ:
8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಬಹಳ ಚುರುಕಾಗಿ ಕೆಲಸ ಮಾಡಿ ತೃಪ್ತಿ ಹೊಂದುವಿರಿ. ನಿಮ್ಮ ವೀರಾವೇಶದ ಮಾತುಗಳಿಂದ ಶತ್ರುಗಳನ್ನು ಸುಮ್ಮನಾಗಿಸುವಿರಿ. ಕೆಲವೊಂದು ಸೂಕ್ಷ್ಮ ವಿಚಾರಗಳು ಚಿಂತೆಗೆ ಕಾರಣವಾಗಿ ಬಹಳ ಆಳವಾಗಿ ಆಲೋಚನೆ ಮಾಡುವಿರಿ. ಆರ್ಥಿಕ ಸ್ಥಿತಿ ಸಾಮಾನ್ಯ. ಮಕ್ಕಳ ಆಸೆಗಾಗಿ ಹೆಚ್ಚಿನ ಹಣ ಕೊಡಬೇಕಾಗುತ್ತದೆ. ವ್ಯವಹಾರಗಳಲ್ಲಿ ಪ್ರಗತಿ. ಮಹಿಳೆಯರು ಮಾತನಾಡುವಾಗ ಎಚ್ಚರದಿಂದಿರಿ, ವಿನಾಕಾರಣ ದೂರು ಬರಬಹುದು. ಕೌಟುಂಬಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಬುದ್ಧಿವಂತಿಕೆ ಪಣಕ್ಕಿಟ್ಟು ಯಶಸ್ಸು ಪಡೆಯುವಿರಿ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ 1 2)
ಯಾವುದೇ ಕೆಲಸಗಳನ್ನು ಮಾಡುವಾಗ ಅತಿಯಾದ ಆತುರ ಬೇಡ. ನಿಮ್ಮ ವ್ಯವಹಾರಗಳನ್ನು ಬಂಧುಗಳ ನಡುವೆ ಬಹಿರಂಗಗೊಳಿಸುವುದು ನಿಮಗೆ ಆಪತ್ತು ತರಬಹುದು. ಆತ್ಮೀಯ ವಿಚಾರಗಳಲ್ಲಿ ಕುಟುಂಬದ ಸಲಹೆ ಪಡೆಯುವುದು ಅತಿ ಉತ್ತಮ. ಸಾಲ ಕೊಡುವುದು ಅಥವಾ ಸಾಲ ತರುವ ಸಂದರ್ಭಗಳಲ್ಲಿ ನೀವು ಕೊಡುವ ದಾಖಲೆಗಳ ಬಗ್ಗೆ ಎಚ್ಚರ ವಹಿಸಿ. ಸಂಸಾರದಲ್ಲಿನ ಕಾವೇರಿದ ಮಾತುಗಳಿಗೆ ಮೌನವೇ ಮದ್ದಾಗಬಹುದು. ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಿಲ್ಲದಿದ್ದರೂ ಸಾಮಾನ್ಯ ಲಾಭಕ್ಕೆ ಏನೂ ಕೊರತೆಯಿಲ್ಲ. ಕೃಷಿಕರ ಆದಾಯದಲ್ಲಿ ವ್ಯತ್ಯಾಸವಿರುವುದಿಲ್ಲ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಅನಿರೀಕ್ಷಿತ ಆದಾಯ ನಿರೀಕ್ಷಿಸಬಹುದು. ಮಿತ್ರರ ಸಹಕಾರಗಳಿಂದ ಹೊಸ ವ್ಯಾಪಾರದಲ್ಲಿ ಅಭಿವೃದ್ಧಿ. ಕೃಷಿಕರಿಗೆ ಆರ್ಥಿಕ ಮುಗ್ಗಟ್ಟುಗಳು ಕಡಿಮೆಯಾಗುತ್ತವೆ. ಬಂಧುಗಳ ಮಧ್ಯಪ್ರವೇಶದಿಂದ ಸಂಸಾರದಲ್ಲಿದ್ದ ಗೋಜಲುಗಳು ನಿವಾರಣೆಯಾಗುತ್ತವೆ. ಭೂ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚು. ಚಿಲ್ಲರೆ ತರಕಾರಿ ವ್ಯಾಪಾರಿಗಳಿಗೆ ಆದಾಯದಲ್ಲಿ ವೃದ್ಧಿ. ತಂದೆಯಿಂದ ಹೊಸ ರೀತಿಯ ವ್ಯವಹಾರಕ್ಕೆ ಸಲಹೆ ಮತ್ತು ಧನಸಹಾಯ ಸಿಗಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಕೈಗಾರಿಕೋದ್ಯಮಿಗಳಿಗೆ ಪ್ರಶಸ್ತ ವಾರವಿದು. ಅವರ ಉದ್ದಿಮೆಯಲ್ಲಿದ್ದ ಕೆಲವೊಂದು ಕಾರ್ಮಿಕ ಸಮಸ್ಯೆಗಳು ಬಗೆಹರಿಯುತ್ತವೆ. ಬಯಸಿದ್ದ ಸರ್ಕಾರಿ ಸಾಲಗಳು ಈಗ ದೊರೆಯುತ್ತವೆ. ತೆರಿಗೆ ತಜ್ಞರಿಗೆ ಬೇಡಿಕೆ ಹೆಚ್ಚಾಗುವುದು. ಮನೆ ಖರೀದಿ ಆಸೆಗೆ ಒಂದು ರೂಪ ದೊರೆಯುತ್ತದೆ. ಹಣದ ಒಳಹರಿವಿನಲ್ಲಿ ಹೆಚ್ಚಳ. ಮಹಿಳಾ ರಾಜಕಾರಣಿಗಳು ಸೂಕ್ತ ಸ್ಥಾನಮಾನ ಪಡೆಯುವರು. ಅವಿವಾಹಿತರಿಗೆ ಸಂಬಂಧಗಳು ಒದಗುವ ಲಕ್ಷಣಗಳಿವೆ. ಹೈನುಗಾರಿಕೆಯವರಿಗೆ ಹೆಚ್ಚಿನ ಆದಾಯ. ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಹೊಸ ವ್ಯಕ್ತಿಗಳ ಪರಿಚಯದಿಂದ ನಿಮ್ಮ ಕಾರ್ಯಸಾಧನೆ ಆಗಲಿದೆ. ಕುಂಟುತ್ತಿದ್ದ ವ್ಯಾಪಾರದಲ್ಲಿ ಈಗ ನಿರೀಕ್ಷಿತ ಲಾಭ ಕಾಣಬಹುದು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಈಗ ಪರಿಹಾರ ಸಿಗಲಿದೆ. ರಾಜಕಾರಣಿಗಳ ರಾಜೀ ಸಂಧಾನಗಳು ಯಶಸ್ವಿಯಾಗಿ, ಪ್ರತಿಷ್ಠಿತ ಸ್ಥಾನವೊಂದನ್ನು ಪಡೆಯುವಿರಿ. ವಿದೇಶದಲ್ಲಿ ನೆಲೆಸಿರುವ ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗಿಬರುತ್ತವೆ. ಆಭರಣಗಳನ್ನು ವಿದೇಶಗಳಿಗೆ ರಫ್ತು ಮಾಡುವವರಿಗೆ ಹೊಸ ನೆಲೆಗಳು ಸಿಗುತ್ತವೆ. ಹಿತಶತ್ರುಗಳು ಸೃಷ್ಟಿಸುವ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಿರಿ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಆಲಸ್ಯದ ನಡವಳಿಕೆ ನಿಮಗೆ ಮುಜುಗರ ತರಬಹುದು. ಮಕ್ಕಳಿಂದ ಧನಸಹಾಯ ಸಿಗುತ್ತದೆ. ಗಾಯಕರಿಗೆ ಸಾಕಷ್ಟು ಹೊಸ ಅವಕಾಶಗಳು ಅರಸಿಬರುತ್ತವೆ. ನಿಮ್ಮ ಹೊಸ ಆಸ್ತಿಗೆ ಕುಟುಂಬದವರೆಲ್ಲರೂ ಹಣ ಕೊಡುವರು. ರಕ್ತ ಸಂಬಂಧಿ ಕಾಯಿಲೆಗಳು ಕಾಡಬಹುದು, ಚಿಕಿತ್ಸೆ ಅತಿ ಮುಖ್ಯ. ಸಂಗಾತಿಯಿಂದ ವ್ಯವಹಾರದ ಬಗ್ಗೆ ಸೂಕ್ತ ಸಲಹೆ, ಸಹಾಯ ಒದಗುತ್ತವೆ. ಲೇವಾದೇವಿ ಮಾಡುತ್ತಿದ್ದವರ ಬಾಕಿ ಹಣಗಳು ಈಗ ಬರುವ ಸಾಧ್ಯತೆ ಇದೆ. ಬಂಧುಗಳಲ್ಲಿನ ವಾದ-ವಿವಾದಗಳಿಂದ ಮುಕ್ತಿ ಪಡೆಯುವಿರಿ. ತಂದೆಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಿ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಸಂಶೋಧನಾ ಕೆಲಸದಲ್ಲಿ ಇರುವವರಿಗೆ ಹೊಸ ಸಂಶೋಧನೆಯ ಗರಿ ಮುಡಿಗೇರಲಿದೆ. ಇದರಿಂದ ಹೊಸ ಸಂಶೋಧನೆಗಳು ಚುರುಕುಗೊಳ್ಳುತ್ತವೆ. ಹೊಸ ವ್ಯಕ್ತಿಗಳಿಂದ ಸಾಕಷ್ಟು ಸಹಕಾರಗಳು ದೊರೆಯುತ್ತವೆ. ಆದಾಯದಲ್ಲಿ ಸ್ವಲ್ಪ ಹಿನ್ನಡೆ ಕಾಣಬಹುದು. ನಿರುದ್ಯೋಗಿಗಳಿಗೆ ಉದ್ಯೋಗದ ಬಾಗಿಲು ತೆರೆಯುತ್ತದೆ. ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುವವರ ವ್ಯವಹಾರ ವೃದ್ಧಿಸುವ ಯೋಗವಿದೆ. ವೃತ್ತಿಯಲ್ಲಿ ಮೇಲಧಿಕಾರಿಗಳ ಸಹಾಯ ದೊರೆತು ಅನುಕೂಲವಾಗಲಿದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಮಿತ್ರರಿಂದ ಸಾಕಷ್ಟು ಲಾಭವಿರಲಿದೆ. ಆತ್ಮೀಯರ ಸಲಹೆಯಿಂದ ಎದುರಾಗಬಹುದಾದ ವಿಪತ್ತಿನಿಂದ ಪಾರಾಗುವಿರಿ. ಮಹಿಳೆಯರು ಹಲವು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಳ್ಳಲು ಅನುವಾಗುವರು. ಆರ್ಥಿಕ ಸ್ಥಿತಿಯಲ್ಲಿ ವ್ಯತ್ಯಾಸ ಇರುವುದಿಲ್ಲ. ಕೋರ್ಟ್ ಕಚೇರಿ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ದೀರ್ಘಕಾಲದಿಂದ ನಡೆಯುತ್ತಿದ್ದ ದಾವೆಗಳು ಈಗ ಅಂತಿಮ ಸ್ವರೂಪಕ್ಕೆ ಬರುತ್ತವೆ. ದಿನಸಿ ಸಗಟು ವ್ಯಾಪಾರಿಗಳಿಗೆ ಲಾಭವಾಗಲಿದೆ. ಕುಟುಂಬ ಸಮೇತರಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡುವ ಯೋಗವಿದೆ. ಹರಿತ ವಸ್ತುಗಳನ್ನು ಉಪಯೋಗಿಸುವಾಗ ಎಚ್ಚರ ಇರಲಿ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ವಕೀಲರು ದಾವೆಗಳನ್ನು ಗೆಲ್ಲುವ ಯೋಗವಿದೆ. ಹಣದ ಒಳಹರಿವು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿರಲಿದೆ. ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ದೊರೆಯಲಿದೆ. ಮೂಳೆ ಸಂಬಂಧಿ ನೋವು ಹೆಚ್ಚಾಗಬಹುದು. ನಿಮ್ಮೆಲ್ಲಾ ಕಾರ್ಯಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಸಂಪರ್ಕ ಅಥವಾ ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡುವವರ ಉದ್ಯೋಗದಲ್ಲಿ ಅಭಿವೃದ್ಧಿ ಇದೆ. ವಿದ್ಯಾರ್ಥಿಗಳಿಗೆ ಇದ್ದ ಸಮಸ್ಯೆಗಳು ಕಡಿಮೆಯಾಗಿ ಉತ್ತಮ ಪ್ರಗತಿ ಕಾಣಬಹುದು. ಉನ್ನತಾಧಿಕಾರಿಗಳಿಗೆ ಸ್ಥಾನಪಲ್ಲಟದ ಸೂಚನೆಯಿದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಬಹುಕಾಲದ ಬಯಕೆಯೊಂದು ಈಡೇರುವ ಲಕ್ಷಣಗಳಿವೆ. ಋಣಗಳು ಪರಿಹಾರವಾಗಿ ಮನಸ್ಸು ಸಂತೃಪ್ತಿ ಹೊಂದುತ್ತದೆ. ವೃತ್ತಿಯಲ್ಲಿ ವೈಯಕ್ತಿಕ ವಿಚಾರಗಳನ್ನು ಯಾರಿಗೂ ಹೇಳದೆ ಗುಪ್ತವಾಗಿ ಇರಿಸಿಕೊಳ್ಳುವುದು ಉತ್ತಮ. ನಾರಿನ ಪದಾರ್ಥಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಬ್ಯಾಂಕುಗಳು ಮೊದಲಾದ ಹಣಕಾಸಿನ ಸಂಸ್ಥೆಗಳಲ್ಲಿ ಕೆಲಸ ಮಾಡುವ ಆರ್ಥಿಕ ತಜ್ಞರಿಗೆ ಪದೋನ್ನತಿ ಲಕ್ಷಣಗಳಿವೆ. ಬುದ್ಧಿವಂತಿಕೆಯಿಂದ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವಿರಿ. ವ್ಯಾಪಾರ ಮತ್ತು ವ್ಯವಹಾರಗಳಿಂದ ಲಾಭವನ್ನು ಪಡೆಯುವಿರಿ. ತಾಯಿಯಿಂದ ಆರ್ಥಿಕ ಸಹಾಯಗಳು ದೊರೆಯುವ ಸಾಧ್ಯತೆಗಳು ಹೆಚ್ಚಿಗೆ ಇವೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಸ್ನೇಹಿತರ ಸಹಕಾರದಿಂದ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಕೃಷಿಕರಿಗೆ ಸರ್ಕಾರದಿಂದ ಸಹಾಯಧನ ಹರಿದು ಬರಲಿದೆ. ಕಳೆದು ಹೋಗಿ, ತೀವ್ರ ಹುಡುಕಾಟದಲ್ಲಿದ್ದ ವಸ್ತುವೊಂದು ಪುನಃ ದೊರೆಯುತ್ತದೆ. ಉನ್ನತ ಶಿಕ್ಷಣದ ಆಕಾಂಕ್ಷೆ ಹೊಂದಿರುವವರಿಗೆ ಅದು ಕೈಗೂಡುವ ಸಾಧ್ಯತೆಗಳಿವೆ. ತಾಯಿಯು ವಿಪರೀತ ಮಮತೆ ತೋರಿಸಿ ದೊಡ್ಡ ಪ್ರಮಾಣದಲ್ಲಿ ಹಣದ ಬೇಡಿಕೆ ಇಡುವ ಸಾಧ್ಯತೆ ಇದೆ. ಹಳೆಯ ಸಾಲಗಳನ್ನು ಈಗ ತೀರಿಸಬಹುದು.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಹಣದ ಒಳಹರಿವು ಉತ್ತಮ. ಮಕ್ಕಳೊಂದಿಗೆ ವಾದವಿವಾದ ಮಾಡದಿರುವುದು ಉತ್ತಮ. ನಿಮ್ಮ ಕೆಲವು ಕಾರ್ಯಗಳಲ್ಲಿ ನಿರೀಕ್ಷಿಸಿದ ಯಶಸ್ಸು ದೊರಕದಿದ್ದರೂ ಸಾಧಾರಣ ಯಶಸ್ಸು ಇದ್ದೇ ಇರುತ್ತದೆ. ಹಾಡುಗಾರರಿಗೆ ವಿಶೇಷ ಸವಲತ್ತು ಮತ್ತು ಗೌರವ ದೊರಕುವ ಲಕ್ಷಣಗಳಿವೆ. ಬಂಧುಗಳೊಂದಿಗೆ ಸಂಬಂಧ ವೃದ್ಧಿಸಲಿದೆ. ಗೃಹಾಲಂಕಾರಕ್ಕಾಗಿ ಹೊಸ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಬಯಸಿದ್ದ ನಿವೇಶನ ಪಡೆಯಲು ಪ್ರಯತ್ನ ಮುಂದುವರಿಸಿ. ಶೀತಬಾಧೆಗಳಿಂದ ಬಳಲುತ್ತಿರುವವರು ಎಚ್ಚರ ವಹಿಸುವುದು ಒಳ್ಳೆಯದು. ತವರಿನಿಂದ ಬರಬೇಕಿದ್ದ ಧನಸಹಾಯ ನಿಧಾನವಾಗಿ ಬರುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT