ಬಾಗಲಕೋಟೆ: ಅಮೃತ ಭಾರತ ಯೋಜನೆಯಡಿ ನಿರ್ಮಾಣವಾಗಿರುವ ಬಾಗಲಕೋಟೆ ನಗರದ ಹೊಸ ರೈಲ್ವೆ ನಿಲ್ದಾಣ ಲೋಕಾರ್ಪಣೆ, ಬಾದಾಮಿ ರೈಲ್ವೆ ನಿಲ್ದಾಣ ನವೀಕರಣ, ಅಭಿವೃದ್ಧಿ ಮತ್ತು ಬಾದಾಮಿ ಮತ್ತು ಗುಳೇದಗುಡ್ಡ ರೈಲ್ವೆ ನಿಲ್ದಾಣ ಬಳಿಯ ಮೇಲ್ಸೆತುವೆ ನಿರ್ಮಾಣ ಕಾಮಗಾರಿಗೆ ಫೆ.26 ರಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದರು.