ಚನ್ನಮ್ಮ ವೃತ್ತದ ಬಳಿ ನಡೆದಿರುವ ಹೋರಾಟ ವೇದಿಕೆಯಲ್ಲಿ ಸೋಮವಾರ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ‘ಎಲ್ಲ ಅರ್ಹತೆಯನ್ನು ಹೊಂದಿರುವ ಮಹಾಲಿಂಗಪುರ ತಾಲ್ಲೂಕು ರಚನೆಗಾಗಿ ಕಳೆದ 719 ದಿನಗಳಿಂದ ಹೋರಾಟ ನಡೆಸಿದ್ದರೂ, ಯಾವುದೇ ಸರ್ಕಾರಗಳು ಸ್ಪಂದಿಸಿಲ್ಲ. ಬರೀ ಭರವಸೆಯಲ್ಲೇ ಕಾಲಹರಣ ಮಾಡುತ್ತಿವೆ. ತಾಲ್ಲೂಕು ಹೋರಾಟ ರಚನೆ ಮರೀಚಿಕೆಯಾಗಿದೆ. ಹೀಗಾಗಿ, ಚುನಾವಣೆ ಬಹಿಷ್ಕರಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು’ ಎಂದು ಹೇಳಿದರು.