ಮದ್ಯ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ವಿಠಲ ಸಾಲಮಂಟಪಿ ಅವರ ಮನೆಗೆ ಮಾತುಕತೆ ನಡೆಸಲು ಆರೋಪಿಗಳು ಹೋಗಿದ್ದರು. ಈ ವೇಳೆ ಆರಂಭವಾದ ಜಗಳ ಬಿಡಿಸಲು ಮುಂದಾದ ತಾಯವ್ವ ಅವರನ್ನು ಎದೆಗೆ ಗುದ್ದಿ ಕೊಲೆ ಮಾಡಿದ್ದಾಗಿ ದೇವರಾಜ ವಿಠಲ ಸಾಲಮಂಟಪಿ ಅವರು ದೂರು ದಾಖಲಿಸಿದ್ದಾರೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.