‘ಶೇಂಗಾ ಖರೀದಿಸಿ, ಹಣ ಪಾವತಿಸದೇ ತಲೆಮರೆಸಿಕೊಂಡಿರುವ ವರ್ತಕ ಸೀನಪ್ಪ ಮತ್ತು ಮುಂದೆ ನಿಂತು ಶೇಂಗಾ ಕೊಡಿಸಿದ ಗೋವಿಂದಪ್ಪ ಎಂಬುವರಿಗೆ ಸಂಬಂಧಿಸಿದ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ದಲ್ಲಾಳಿಗಳಿಗೆ ಹಣ ಸಂದಾಯ ಮಾಡಬೇಕು’ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಇದಕ್ಕೆ ವರ್ತಕರು, ದಲ್ಲಾಳಿಗಳು ಸಮ್ಮತಿಸಿದರು.