ನಗರದ ಪಾರ್ವತಿನಗರ ಮುಖ್ಯರಸ್ತೆಯಲ್ಲಿರುವ ಎಸ್ಪಿ ಮನೆ ಬಳಿ, ಕಪ್ಪಗಲ್ಲು ರಸ್ತೆ, ದುರ್ಗಮ್ಮ ಗುಡಿ ಸೇತುವೆ, ಕ್ರೀಡಾಂಗಣ ಬಳಿಯ ರೈಲು ಸೇತುವೆ, ಸತ್ಯನಾರಾಯಣಪೇಟೆ ರೈಲು ಕೆಳ ಸೇತುವೆ. ಸಣ್ಣ ಮಾರುಕಟ್ಟೆ ರಸ್ತೆ, ಪಾಲಿಕೆ ಮುಂಭಾಗ,ತಾಲ್ಲೂಕು ಕಚೇರಿ ಮುಂಭಾಗ, ಕೋಟೆ ರಸ್ತೆ, ದೇವಿನಗರ ರಸ್ತೆ ಬುಡಾ ವಾಣಿಜ್ಯ ಸಂಕೀರ್ಣ, ಹೊಸ ಬಸ್ ನಿಲ್ದಾಣದ ಎದುರು, ಮಿಲ್ಲರ್ಪೇಟೆ, ರಾಘವ ಕಲಾಮಂದಿರ ಪಕ್ಕದ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ಆವರಿಸಿತ್ತು. ತಗ್ಗಿನ ಪ್ರದೇಶಗಳ ಕೆಲ ಮನೆಗಳಿಗೂ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು.