ಈ ವೇಳೆ ಸೇನೆಯ ಮುಖಂಡ ದುರುಗೇಶ್ ಮಾತನಾಡಿ, ‘ರೈತ ಮಹಿಳೆ ದಿದ್ಗಿ ಮೈಲಮ್ಮ, 30 ವರ್ಷಗಳಿಂದ ಅದೇ ಜಾಗದಲ್ಲಿ ಕೃಷಿ ಮಾಡುತ್ತಿದ್ದರು. ಸಾಗುವಳಿ ಪಟ್ಟಾ ನೀಡುವಂತೆ ಸರ್ಕಾರಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೂ ಏಕಾಏಕಿಯಾಗಿ ಜಮೀನಿನಲ್ಲಿ ನರೇಗಾ ಕಾಮಗಾರಿ ನಡೆಸಲು ಮುಂದಾಗಿದ್ದರಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.