ಸಾರಿಗೆ ಸಂಸ್ಥೆಯ ಬಸ್ಸು ಬಾಗಲಕೋಟೆಯಲ್ಲಿ ವಲಸೆ ಕಾರ್ಮಿಕರನ್ನು ಬಿಟ್ಟು ರಾಮನಗರಕ್ಕೆ ಹಿಂತಿರುಗುವಾಗ ಕೂಡ್ಲಿಗಿ ಬಳಿ ಕಂದಕಕ್ಕೆ ಉರುಳಿದೆ. ಈ ವೇಳೆ ಅದರೊಳಗಿದ್ದ ಚಾಲಕ ಶರಣಪ್ಪ ಕಾಲ್ಗುಡಿ ಗಾಯಗೊಂಡಿದ್ದಾರೆ. ಅದೇ ಮಾರ್ಗವಾಗಿ ಲಕ್ಷ್ಮಣ ಸವದಿ ಅವರು ಬೆಂಗಳೂರಿಗೆ ಹೋಗುತ್ತಿದ್ದರು. ಬಸ್ ಅಪಘಾತಕ್ಕೀಡಾಗಿರುವುದನ್ನು ಕಂಡು, ಕಾರು ನಿಲ್ಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.