ಪಟ್ಟಣದ ಗೊರವಿನ ತೋಟದಲ್ಲಿ ಬಂಗಾರದ ಅಂಗಡಿ ಇಟ್ಟುಕೊಂಡಿದ್ದ ನಾಗರಾಜ್ ಬಳಿ ಅನ್ನಪೂರ್ಣಮ್ಮ ಅವರು ಮೂರು ವರ್ಷಗಳ ಹಿಂದೆ 510 ಗ್ರಾಂ ತೂಕದ ಚಿನ್ನಾಭರಣ ಅಡವಿಟ್ಟು ₹15 ಲಕ್ಷ ಸಾಲ ಪಡೆದಿದ್ದರು. ಕೆಲ ತಿಂಗಳ ಬಳಿಕ ಸಾಲದ ಬಡ್ಡಿ ಹಣ ಮತ್ತು ಅಸಲು ₹3 ಲಕ್ಷ ವಾಪಾಸ್ ಕಟ್ಟಿದ್ದರು. ಅದೇ ರೀತಿ 56 ಜನರಿಗೆ ಆಭರಣ ತಯಾರಿಸಿಕೊಡುವುದಾಗಿ ನಂಬಿಸಿ ₹1,34,53,000 ನಗದು ಹಾಗೂ ಗಿರವಿ ಇಟ್ಟುಕೊಂಡಿದ್ದ ₹59, 08,326 ಮೌಲ್ಯದ 1858.69 ಗ್ರಾಂ ತೂಕದ ಚಿನ್ನಾಭರಣ ತೆಗೆದುಕೊಂಡು ಹೋಗಿ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.