ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಮಾತನಾಡಿ, ‘ಪ್ರತಿ ಜಾನುವಾರಿಗೆ ದಿನಕ್ಕೆ 5 ಕೆಜಿಯಂತೆ ಮೇವು ವಿತರಿಸಲಾಗುತ್ತದೆ. ರೈತರು ಪ್ರತಿ ಕೆಜಿ ಮೇವಿಗೆ ₹2 ಪಾವತಿಸಿ ಕೊಂಡೊಯ್ಯಬಹುದು. ತಾಲ್ಲೂಕಿನಲ್ಲಿ ಅಗತ್ಯ ಪ್ರಮಾಣದ ಮೇವು ಲಭ್ಯವಿದ್ದು, ಇಟ್ಟಿಗಿ ಹೋಬಳಿಯಲ್ಲಿ ಕೊರತೆ ಇರುವ ಕಾರಣ ಮೇವು ಬ್ಯಾಂಕ್ ತೆರೆಯಲಾಗಿದೆ. ಸಮರ್ಪಕ ರೀತಿಯಲ್ಲಿ ಮೇವು ವಿತರಣೆ ಮಾಡಲು ಜನರ ಸಹಕಾರ ಮುಖ್ಯ’ ಎಂದರು.