ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ವಿಭಾಗದ ಸೋಮತ್ತನಹಳ್ಳಿ ಫೀಡರ್ನಿಂದ 15ಕ್ಕೂ ಹೆಚ್ಚು ಹಳ್ಳಿಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಪೂರೈಕೆ ಮಾಡುವ ಮಾರ್ಗದಲ್ಲಿ ರೈತರ ಐ.ಪಿ.ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕರ್ತವ್ಯ ಲೋಪವೆಸಗಿರುವುದರ ಜೊತೆಗೆ ದಿನಕ್ಕೆ 18 ಗಂಟೆಗಳಂತೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಇಲಾಖೆಗೆ ಆರ್ಥಿಕ ನಷ್ಟವುಂಟು ಮಾಡಿದ ಹಿನ್ನೆಲೆಯಲ್ಲಿ ಬೆಸ್ಕಾಂ ಮೆಕಾನಿಕ್ ದರ್ಜೆ 2 - ಸಿ.ಭಕ್ತಿರಾಜು, ಸಹಾಯಕ ಮಾರ್ಗದಾಳು ಡಿ.ಎಂ.ವೆಂಕಟಸ್ವಾಮಿ, ಕಿರಿಯ ಮಾರ್ಗದಾಳು ಎನ್.ಮಧುಸೂದನ್ ಅವರನ್ನು ಅಮಾನತುಗೊಳಿಸಲಾಗಿದೆ.