ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣ ಸಮೀಪದ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿನ ಬೇಕರಿಯಲ್ಲಿ ಗುರುವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ.
ಸುರೇಶ್ ಎಂಬುವವರಿಗೆ ಸೇರಿರುವ ಎಲ್.ಜೆ.ಅಯ್ಯಂಗಾರ್ ಬೇಕರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ವ್ಯಾಪಿಸಿ, ಬೇಕರಿಯಲ್ಲಿನ ವಸ್ತುಗಳೆಲ್ಲವು ಸುಟ್ಟು ಹೋಗಿವೆ.
ಸ್ಥಳೀಯ ನಗರಸಭೆ ಸದಸ್ಯ ಮಲ್ಲೇಶ್ ಅವರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಮೂಲಕ ಬೆಂಕಿ ಇತರೆಡೆಗೆ ವಾಪಿಸುವುದನ್ನು ತಪ್ಪಿಸಿದರು.