ಒಂದು ವಾರದಿಂದ ಈಚೆಗೆ ಮಳೆ ಬೀಳುತ್ತಿರುವುದರಿಂದ ರೈತರು ಟ್ರ್ಯಾಕ್ಟರ್ಗಳ ಮೂಲಕ ಹೊಲಗಳಲ್ಲಿ ಮೊದಲ ಉಳಿಮೆ ಪ್ರಾರಂಭಿಸಿದ್ದಾರೆ. ಮಳೆ ಆಶ್ರಯದಲ್ಲಿ ರಾಗಿ, ಮುಸುಕಿನಜೋಳ ಬೆಳೆಯುವ ರೈತರು ಸಾಮಾನ್ಯವಾಗಿ ಜೂನ್ ಅಂತ್ಯದ ವೇಳೆಗೆ ಭೂಮಿಯನ್ನು ಉಳಿಮೆ ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ ಬಿತ್ತನೆಗೆ ಹದಗೊಳಿಸಿಕೊಳ್ಳುತ್ತಾರೆ. ಮಳೆ ಆಶ್ರಯದಲ್ಲಿ ಮುಸುಕಿನಜೋಳ ಬೆಳೆಯುವ ರೈತರು ಮೇ ಅಂತ್ಯದಿಂದಲೇ ಬಿತ್ತನೆ ಪ್ರಾರಂಭಿಸಲು ಭೂಮಿ ಸಿದ್ದಗೊಳಿಸಿಕೊಂಡಿದ್ದಾರೆ.