ಮೇ 21 ರಂದು ತೋಟಿಕೆಂಪಣ್ಣ ಹಾಗೂ ದೊಡ್ಡಆಂಜಿನಪ್ಪ ಅವರ ಕುಟುಂಬದವರಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸಾಟಿಡುವ ಕಾರ್ಯಕ್ರಮ, ಮೇ 26 ರಂದು ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ಅವರ ಕುಟುಂಬದಿಂದ 108 ಕಳಶಗಳ ಹೋಮ ಮಹಾಭಿಷೇಕ, ಸಹಸ್ರನಾಮಾರ್ಚನೆ ಪೂಜೆ, ಮೇ 27 ರಂದು ಸಂಗಮೇಶ್ವರ ದೇವಾಲಯದ ಹತ್ತಿರದಿಂದ ಜಲಗಂಗಮ್ಮನವರನ್ನು ದೇವಾಲಯಕ್ಕೆ ಬರಮಾಡಿಕೊಳ್ಳಲಾಗುವುದು. ಮೇ 28 ರಂದು ದೀಪಾರತಿ ನಡೆಯಲಿವೆ ಎಂದು ತಿಳಿಸಿದ್ದಾರೆ.