ಚಿಕ್ಕಬಳ್ಳಾಪುರ-ವಿಜಯಪುರ ಮುಖ್ಯರಸ್ತೆ ನಡುವೆ ಇರುವ ಈ ತಂಗುದಾಣವನ್ನು ಸಂಪೂರ್ಣವಾಗಿ ಕಲ್ಲಿನಿಂದ ಕಟ್ಟಿದ್ದು, ಕುಳಿತುಕೊಳ್ಳಲು ಅಳವಡಿಸಿದ್ದ ಕಲ್ಲಿನ ಆಸನಗಳು ಮುರಿದು ಬಿದ್ದಿವೆ. ಕಟ್ಟಡವು ಬಿರುಕು ಬಿಟ್ಟುದ್ದು, ಶಿಥಿಲಾವಸ್ಥೆಯಲ್ಲಿದೆ. ಇನ್ನೂ ನಿಲ್ದಾಣದ ತುಂಬೆಲ್ಲಾ ಕಸತುಂಬಿಕೊಂಡಿದೆ. ಈ ಕಾರಣಗಳಿಂದ ಪ್ರಯಾಣಿಕರು ತಂಗುದಾಣದಿಂದ ದೂರ ಉಳಿದಿದ್ದಾರೆ.