ಸುಮಾರು 1,200 ಅಡಿಗಳ ಆಳಕ್ಕೆ ಕೊರೆದಿರುವ ಕೊಳವೆಬಾವಿಗಳಲ್ಲಿ ನೀರು ಮೇಲೆತ್ತುತ್ತಿದ್ದ ರೈತರ ಪಾಲಿಗೆ, ಕಳೆದ ವರ್ಷದಲ್ಲಿ ಆಗಿದ್ದ ಉತ್ತಮ ಮಳೆ ಆಸರೆಯಾಗಿತ್ತು. ಅಂತರ್ಜಲದ ಮಟ್ಟ ವೃದ್ಧಿಯಾಗುವ ಆಶಾಭಾವನೆ ಇತ್ತು. ಈ ವರ್ಷದಲ್ಲಿ ಮಳೆಯಾಗದ ಕಾರಣ, ಎಲ್ಲೆಲ್ಲೂ ಬರಗಾಲವಿದೆ. ಕೆರೆ, ಕುಂಟೆಗಳಲ್ಲಿ ಸಂಗ್ರಹವಾಗಿದ್ದ ನೀರು ಬತ್ತಿಹೋಗುವ ಹಂತಕ್ಕೆ ಬಂದಿದ್ದು, ರೈತರಲ್ಲಿ ಪುನಃ ಆತಂಕ ಶುರುವಾಗಿದೆ.