ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ‘ಯುವಕನಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯಾವುದೇ ಕೆಲಸ ಇರಲಿಲ್ಲ. ಯಾವುದೇ ಸರ್ಕಾರಿ ಯೋಜನೆಯ ಕೆಲಸಕ್ಕೂ, ಮನವಿ ನೀಡಲೂ ಅವರು ಬಂದಿಲ್ಲ. ಲಗಮೇಶ್ವರ ಗ್ರಾಮದಲ್ಲಿ ಯುವಕ ಎರಡು ದಿನಗಳ ಹಿಂದೆ ಕೆಲವರೊಂದಿಗೆ ಜಗಳ ಮಾಡಿಕೊಂಡಿದ್ದ. ಅವರು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಬಂಧಿಸುತ್ತಾರೆ ಎಂಬ ಭಯದಿಂದ ಊರು ಬಿಟ್ಟು ಬೆಳಗಾವಿಯಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದ. ಎರಡು ದಿನಗಳ ಬಳಿಕ ಸಂಬಂಧಿಕರು ಆತನ ಕೈಯಲ್ಲಿ ₹200 ಕೊಟ್ಟು ಊರಿಗೆ ಮರಳುವಂತೆ ತಿಳಿಸಿದ್ದರು. ಆ ಹಣದಿಂದ ಕ್ರಿಮಿನಾಶಕ ಖರೀದಿಸಿದ ಯುವಕ, ಎತ್ತ ಹೋಗಬೇಕು ಎಂದು ಗೊತ್ತಾಗದೇ ಜಿಲ್ಲಾಧಿಕಾರಿ ಕಚೇರಿ ಬಂದು ಕುಡಿದಿದ್ದಾನೆ’ ಎಂದರು.