ಈ ಪ್ರಕರಣದ ಕುರಿತು ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲು ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದರು. ಆದರೆ, ಕಚೇರಿಯೊಳಗೆ ತೆರಳಲು ಅವಕಾಶ ನೀಡದ್ದರಿಂದ ಕಚೇರಿ ಮುಂದೆಯೇ ಪ್ರತಿಭಟನೆಗೆ ಕುಳಿತಿದ್ದಾರೆ.
'ಕಚೇರಿಯೊಳಗೆ ಹೋಗಲು ಮೇಯರ್ ಗೆ ಅವಕಾಶ ಕೊಡದೆ ಪೊಲೀಸರು ಅಪಮಾನ ಮಾಡಿದ್ದಾರೆ' ಎಂದು ದೂರಿದ್ದಾರೆ
ಆಯುಕ್ತರ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ರಾಮಪ್ಪ, ಡಿಸಿಪಿ ಪಿ.ವಿ.ಸ್ನೇಹಾ ಅವರು ಸಭೆ ನಡೆಸುತ್ತಿದ್ದಾರೆ.