ಬಿಜೆಪಿ ಕಾರ್ಯಕರ್ತರ ಸಭೆಯ ಅರ್ಧಗಂಟೆ ಮುಂಚಿತವಾಗಿ ಮತಕ್ಷೇತ್ರದ ನೂರಾರು ಕಾರ್ಯಕರ್ತರು ಸಭೆಗೆ ಬಂದಿದ್ದರು. ಉತ್ತರ ಪಕ್ಷದ ಮಂಡಳ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಚುನಾವಣೆ ವಿಕ್ಷಕರಾದ ಹೊಳೆಪ್ಪಾ, ಪಿಡಿಒ ರಾಜು ಬೇಡಸೂರ, ರವಿ ಹಂಜಿ, ದಡ್ಡಿ ಗ್ರಾಮದ ಕಾರ್ಯಕರ್ತ ಪ್ರಸಾದ ಪಾಗನೀಸ್ ಮತ್ತು ಕೆಲವರಿಗೆ ಜೇನ್ನೊಣ ಕಡಿದವು. ಕೆಲವರು ತಪ್ಪಿಸಿಕೊಳ್ಳಲು ಮೈದಾನದಲ್ಲಿ ಓಡಿದರು. ಗಾಯಗೊಂಡವರು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡರು.