ಬೆಳಗಾವಿ: ಅಥಣಿ ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ಸೋಮವಾರ ಕಬ್ಬು ತುಂಬಿದ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಬಾಲಕ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.
ಸಮರ್ಥ ಪರಶುರಾಮ ಕಾಗವಾಡ (15) ಮೃತ ಬಾಲಕ. ಕಬ್ಬು ಹೇರಿದ ಮೇಲೆ ಬಾಲಕ ಅದರ ಮೇಲೆ ಹತ್ತಿ ಕುಳಿತಿದ್ದ. ಟ್ರ್ಯಾಕ್ಟರ್ ಚಲಿಸುವಾಗ ಪುಟಿದು ಕೆಳಗೆ ಬಿದ್ದ. ಆತನ ಮೇಲೆಯೇ ಟ್ರ್ಯಾಕ್ಟರ್ ಹರಿದ ಪರಿಣಾಮ, ಸ್ಥಳದಲ್ಲೇ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.