ಗೋಕಾಕ ಮಿಲ್ಸ್ ಒಡೆತನದ ಶೌಚಾಲಯದ ಸ್ವಚ್ಛತೆ ಕೆಲಸದ ಗುತ್ತಿಗೆಯನ್ನು ಬಿಟ್ಟುಕೊಡಲು ಚೇತನ ಒಪ್ಪಿರಲಿಲ್ಲ. ಜತೆಗೆ, ತಿಲಕ ಅವರ ಸಹೋದರ ಗೌತಮ ಅವರಿಗೆ ಮದ್ಯಪಾನ ಮತ್ತು ಧೂಮಪಾನ ಮಾಡುವಂತೆ ಪುಸಲಾಯಿಸುತ್ತಿದ್ದ. ಇದರಿಂದ ಸಿಟ್ಟಾದ ತಿಲಕ, ‘ನಿನ್ನಂತೆ ನನ್ನ ತಮ್ಮನಿಗೂ ದುಶ್ಚಟ ಕಲಿಸಬೇಡ’ ಎಂದು ಬುದ್ಧಿವಾದ ಹೇಳಿದ್ದ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಚೇತನ ವಿನಾಕಾರಣ ಜಗಳ ತೆಗೆದಾಗ, ಕೊಲೆಗೈದ ಘಟನೆಯು 2023ರ ಜ.24ರಂದು ರಾತ್ರಿ ನಡೆದಿತ್ತು.