ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಕುಡುಗೋಲಿನಿಂದ ಇರಿದು ಕೊಲೆ

Published 14 ಅಕ್ಟೋಬರ್ 2023, 16:30 IST
Last Updated 14 ಅಕ್ಟೋಬರ್ 2023, 16:30 IST
ಅಕ್ಷರ ಗಾತ್ರ

ಬೆಳಗಾವಿ: ಸಮೀಪದ ಗೋಜಗಾ ಗ್ರಾಮದಲ್ಲಿ ಶನಿವಾರ ಸಣ್ಣ ಜಗಳ ವಿಕೋಪಕ್ಕೆ ಹೋಗಿ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅವಸಾನಗೊಂಡಿದೆ.

ರಾಜು ಬಂಡು ನಾಯ್ಕ್ (32) ಕೊಲೆ ಆರೋಪಿ. ಮಾರುತಿ ನಾಯ್ಕ್ (32) ಕೊಲೆಯಾದವರು. ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಬೆಳೆಯಿತು. ಆಗ ರಾಜು ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ಮಾರುತಿ ಅವರ ಹೊಟ್ಟೆಗೆ ಇರಿದ. ತೀವ್ರ ಗಾಯಗೊಂಡ ಅವರನ್ನು ಸುತ್ತಲಿನ ಜನ ಬೈಕ್‌ ಮೇಲೆ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ಅಷ್ಟರೊಳಗೆ ತೀವ್ರ ರಕ್ತಸ್ರಾವದಿಂದ ಮಾರುತಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು ಎಂದು ಮೃತನ ಕುಟುಬದವರು ಮಾಹಿತಿ ನೀಡಿರು. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT