ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕವು ದಕ್ಷಿಣ ಕರ್ನಾಟಕದಷ್ಟು ಅಭಿವೃದ್ಧಿ ಹೊಂದಿಲ್ಲ. ದಕ್ಷಿಣ ಕರ್ನಾಟಕದ ಅಧಿಕಾರಿಗಳಿಗೆ ಉತ್ತರ ಕರ್ನಾಟಕದೆಡೆ ವರ್ಗಾವಣೆಯಾದರೆ ಬರುವುದೇ ಇಲ್ಲ. ಏನಾದರೂ ಮಾಡಿ ಅಲ್ಲಿಯೆ ಉಳಿಯಲು ಪ್ರಯತ್ನಿಸುತ್ತಾರೆ. ಇದರರ್ಥವನ್ನು ಈ ಭಾಗದ ಎಲ್ಲ ಜನರು ಅರಿತುಕೊಳ್ಳಬೇಕು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಬೇಡವಾದಲ್ಲಿ ಇತ್ತ ಎಲ್ಲ ಸೌಲಭ್ಯ ಒದಗಿಸಲು ಮುಂದಾಗಬೇಕು’ ಎಂದರು.