ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಸ್.ಡಿ.ಗಾಂಜಿ ಉದ್ಘಾಟಿಸಿದರು. ಸಂಘದ ರಾಜ್ಯ ಘಟಕದ ಅಧ್ಯಕ್ಷ ಪಿ.ಮುರಳೀಧರ ಶಿಕ್ಷಕರ ಸಮಸ್ಯೆಗಳ ಕುರಿತು ವಿವರಿಸಿದರು. ಇದೇವೇಳೆ ಸಂಘದ ಲೋಗೋ ಅನಾವರಣಗೊಳಿಸಲಾಯಿತು.
ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಂ.ಸಿಂಧೂರ, ಉಮಾದೇವಿ ಹಿರೇಮಠ, ಯಲ್ಲಪ್ಪಗೌಡ, ನರಸಿಂಹಮೂರ್ತಿ, ಕೆ.ಎನ್.ಶಂಕರ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ನಾಗಲಾಪುರ, ವಿಠ್ಠಲ ವಾಗೇರಿ, ಗೋವಿಂದ ಸಣ್ಣಕ್ಕಿ, ಸುಕುಮಾರ ಬಾಳಿಕಾಯಿ, ಉಮೇಶ್ವರ ಮರಗಾಲ, ರಾಜೇಶ್ವರಿ ಖನಗಣ್ಣಿ, ದೀಪಿಕಾ ಸುಳೇಬಾವಿ, ಶೃತಿ ಸುಪ್ಪನ್ನವರ ಇತರರಿದ್ದರು.