ಜಮಖಂಡಿ ಓಲೇಮಠದ ಚನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಕಾಕದ ಶೂನ್ಯ ಸಂಪಾದನಾ ಮಠದ ಬಸವಪ್ರಭು ದೇವರು, ಬೆಲ್ಲದ ಬಾಗೇವಾಡಿ ಮಠದ ಶಿವಾನಂದ ಸ್ವಾಮೀಜಿ, ಚಿಮ್ಮಡದ ಅಲ್ಲಮಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಅಭಿನಂದನಾ ನುಡಿಗಳನ್ನಾಡಿದರು. ಗುರುಲಿಂಗಯ್ಯ ಹಿರೇಮಠ, ಬಿ.ಆರ್.ಆಜೂರ, ರಾಮನಗೌಡ ಪಾಟೀಲ, ಮಲ್ಲಿಕಾರ್ಜುನ ಖಾನಗೌಡ, ಗಿರಿಮಲ್ಲಪ್ಪ ಅಂದಾನಿ, ಕೃಷ್ಣಪ್ಪ ಮಂಟೂರ, ರಮೇಶ ಬಂದಿ, ಗುರುಲಿಂಗಯ್ಯ ಮಠದ, ಶಿವಲಿಂಗಪ್ಪ ವಾಲಿ, ಧರೆಪ್ಪ ಚಿನಗುಂಡಿ, ರಮೇಶ ಉಳ್ಳಾಗಡ್ಡಿ ಇದ್ದರು. ಗವಾಯಿ ಪಾಟೀಲ, ಗದಗ ತೋಟೆಂದ್ರಕುಮಾರ ಇವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಸತೀಶ ಬಂದಿ ವಂದಿಸಿದರು.