ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬೆಳಗಾವಿ | 3 ತಿಂಗಳಲ್ಲಿ ₹4 ಕೋಟಿ ಮದ್ಯ ವಶ: ಅಕ್ರಮ ಸಾಗಣೆಗೆ ಬೇಕಿದೆ ಬಿಗಿ ಅಂಕುಶ

Published : 29 ಜನವರಿ 2024, 7:37 IST
Last Updated : 29 ಜನವರಿ 2024, 7:37 IST
ಫಾಲೋ ಮಾಡಿ
Comments
ಅಕ್ರಮವಾಗಿ ಲಾರಿಯಲ್ಲಿ  ಸಾಗಿಸುತ್ತಿದ್ದ ಮದ್ಯವನ್ನು ಬೆಳಗಾವಿಯಲ್ಲಿ ಅಬಕಾರಿ ಅಧಿಕಾರಿಗಳು ಭಾನುವಾರ ಪರಿಶೀಲಿಸಿದರು
ಅಕ್ರಮವಾಗಿ ಲಾರಿಯಲ್ಲಿ  ಸಾಗಿಸುತ್ತಿದ್ದ ಮದ್ಯವನ್ನು ಬೆಳಗಾವಿಯಲ್ಲಿ ಅಬಕಾರಿ ಅಧಿಕಾರಿಗಳು ಭಾನುವಾರ ಪರಿಶೀಲಿಸಿದರು
ಬೆಳಗಾವಿ ತಾಲ್ಲೂಕಿನ ಕಾಕತಿ ಬಳಿ ಗುರುವಾರ ರಾತ್ರಿ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದರು
ಬೆಳಗಾವಿ ತಾಲ್ಲೂಕಿನ ಕಾಕತಿ ಬಳಿ ಗುರುವಾರ ರಾತ್ರಿ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದರು
ಶೇ 30ರಷ್ಟು ಸಿಬ್ಬಂದಿ ಕೊರತೆ
ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಣೆ ನಿರಂತರ ನಡೆದೇ ಇದೆ. ಇದನ್ನು ತಡೆಯಲು ವ್ಯವಸ್ಥಿತ ಸಿದ್ಧತೆ ಅಗತ್ಯ. ಆದರೆ ಅಬಕಾರಿ ಇಲಾಖೆಯಲ್ಲಿ ಶೇ 30ರಷ್ಟು ಸಿಬ್ಬಂದಿ ಕೊರತೆ ಇದೆ. ಅಧಿಕಾರಿ ಹಂತದ ಹುದ್ದೆಗಳಲ್ಲಿ ಎಲ್ಲರೂ ಇದ್ದಾರೆ. ಆದರೆ ದಾಳಿಗೆ ಕಾವಲಿಗೆ ಮುಖ್ಯವಾಗಿ ಬೇಕಾಗಿರುವುದು ಕಾನ್‌ಸ್ಟೆಬಲ್‌ ಹಂತದ ಸಿಬ್ಬಂದಿ. ಸಿಬ್ಬಂದಿ ಕೊರತೆಯ ಕಾರಣ ಈಗ ಅಧಿಕಾರಿಗಳೇ ದಾಳಿ ಮಾಡಲು ತೆರಳುತ್ತಿದ್ದಾರೆ. ಸದ್ಯದ ಪ್ರಕರಣಗಳ ಸಂಖ್ಯೆ ವಶಪಡಿಸಿಕೊಂಡ ಮಾಲುಗಳ ಪ್ರಮಾಣ ಮೊತ್ತ ಹಾಗೂ ಅಕ್ರಮ ನಡೆಯುವ ಸ್ಥಳ– ರೀತಿಗಳ ಲೆಕ್ಕಾಚಾರ ಹಾಕಿದರೆ ಇನ್ನೂ ಹಲವು ಸಿಬ್ಬಂದಿಯ ಅವಶ್ಯಕತೆ ಹೆಚ್ಚಿದೆ. ಸರ್ಕಾರ ಎಷ್ಟು ಬೇಗ ಸಿಬ್ಬಂದಿ ನೇಮಕ ಮಾಡುವುದೋ ಅಷ್ಟು ವೇಗದಲ್ಲಿ ಅಕ್ರಮ ತಡೆಯಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.
ಶಿಕ್ಷೆ ಪ್ರಮಾಣ ಏನು?
ಮದ್ಯ ಅಕ್ರಮ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದವರಿಗೆ ಅಪರಾಧ ಸಾಬೀತಾದರೆ ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ಇದೆ. ಬಹಳಷ್ಟು ಪ್ರಕರಣಗಳಲ್ಲಿ ಮಾಲು ಸೀಜ್‌ ಮಾಡಿ ದಂಡ ಹಾಕಿ ಬಿಟ್ಟ ಉದಾಹರಣೆಗಳೇ ಇವೆ. ಸುಪ್ರೀಂಕೋರ್ಟ್‌ನ ಹೊಸ ನಿಮಯ ‘41ಸಿ’ ಪ್ರಕಾರ ಐದು ವರ್ಷಗಳವರೆಗೆ ಶಿಕ್ಷೆ ಪ್ರಕಟವಾದರೆ ಮಾತ್ರ ಜೈಲುವಾಸವಾಗುತ್ತದೆ. ಅದಕ್ಕಿಂತ ಕಡಿಮೆ ಶಿಕ್ಷೆ ಆಗುವಂಥ ಪ್ರಕರಣವಿದ್ದರೆ ಆರೋಪಿಗಳಿಗೆ ಬೇಲ್‌ ಕೂಡ ನೀಡಲಾಗುತ್ತದೆ. ಕಾನೂನು ಸಡಿಲತೆ ಕಾರಣ ಅಕ್ರಮ ಸಾಗಣೆ ಮಾಡುವವರಿಗೆ ಭಯ ಮಾಯವಾಗಿದೆ. ಹೀಗಾಗಿ ದಾಳಿಯ ವ್ವವಸ್ಥೆ ಹಾಗೂ ನಂತರ ಹಾಕಬೇಕಾದ ಕಲಂಗಳ ಬಗ್ಗೆ ಅಧಿಕಾರಿಗಳು ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ ಎನ್ನುವುದು ನಿವೃತ್ತ ಅಧಿಕಾರಿಯೊಬ್ಬರ ಅನುಭವ.
ವೃದ್ಧಿಸಬೇಕಿದೆ ತಾಂತ್ರಿಕ ಶಕ್ತಿ
ಅಕ್ರಮ ಸಾಗಣೆ ಪತ್ತೆ ಮಾಡಲು ಹಾಗೂ ಮದ್ಯದ ಪರಿಶೀಲನೆಗೆ ಸದ್ಯ ಸುಲಭ ಮಾರ್ಗಗಳು ಇಲ್ಲ. ವೇಗವಾಗಿ ಚಲಿಸುವ ವಾಹನಗಳನ್ನು ಬೆನ್ನತ್ತಿ ನಿಲ್ಲಿಸಿ ಸಿಬ್ಬಂದಿಯೇ ವಾಹನ ಜಾಲಾಡಿ ಅಕ್ರಮ ತಡೆಯಬೇಕಾದ ಅನಿವಾರ್ಯ ಇದೆ. ಮೆಟಲ್‌ ಡಿಟೆಕ್ಟರ್‌ ಮಾದರಿಯಲ್ಲಿ ‘ಅಲ್ಕೋಹಾಲ್‌ ಸ್ಕ್ಯಾನರ್‌’ಗಳನ್ನು ವಾಹನಗಳ ತಪಾಸಣೆಗೆ ಅಳವಡಿಸಬೇಕು. ಇದರಿಂದ ಸಮಯದ ಉಳಿತಾಯದ ಜತೆಗೆ ಸಿಬ್ಬಂದಿ ಶ್ರಮ– ಸಮಯ ಉಳಿಯುತ್ತದೆ. ಅಲ್ಲದೇ ದಾಳಿಯಿಂದ ಯಾವುದೇ ವಾಹನ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಅನುಕೂಲವಾಗಿತ್ತದೆ ಎಂಬುದು ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರ ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT