ಇಲ್ಲಿನ ಕಾರಂಜಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಎರಡನೇಯ ಸೋಮವಾರದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘12ನೇ ಶತಮಾನದಲ್ಲಿ ಕೆಳವರ್ಗದ, ಅನಕ್ಷರಸ್ಥ ವಚನಕಾರ್ತಿಯರು ಅಡುಗೆ ಮನೆಯಿಂದ ಅನುಭವ ಮಂಟಪದವರೆಗೆ ಬಂದು ತಮ್ಮ ಅನುಭಾವಕ್ಕೆ ಅಭಿವ್ಯಕ್ತಿ ನೀಡುವ ಮೂಲಕ ವಚನ ಸೃಷ್ಟಿಗೆ ಕಾರಣರಾದರು. ಈ ವಚನಗಳು ಸ್ತ್ರೀ ಚರಿತ್ರೆಯನ್ನು ಕಟ್ಟಿಕೊಡುವ ಇತಿಹಾಸದ ಸಾಮಗ್ರಿಗಳಾಗಿವೆ’ ಎಂದರು.