ಕಲ್ಲುಕಂಭ ಗ್ರಾಮದಲ್ಲಿ ಪಿಗ್ಮಿ ಹಣ ಸಂಗ್ರಹ ಮಾಡುತ್ತಿದ್ದ 16ರ ಹರೆಯದ ಮಂಜುನಾಥ ಆಕಸ್ಮಿಕವಾಗಿ ದೇಹದಲ್ಲಿ ಆದ ಬದಲಾವಣೆಯಿಂದ ಮಂಜಮ್ಮ ಜೋಗತಿಯಾಗಿ ಬದಲಾಗಿದ್ದಾರೆ. ಗುರು ಕಾಳಮ್ಮ ಜೋಗತಿ ಬಳಿ ಸೇರಿಕೊಂಡ ನಂತರ ಜೋಗತಿ ನೃತ್ಯ ಕಲೆತು, ತಂಡ ಕಟ್ಟಿಕೊಂಡು ಸಾಗಿದ ಜೀವನದ ದಾರಿಯಲ್ಲಿ ಕಂಡ ಸಂಕಷ್ಟ, ಸಂಕೋಲೆ, ಬದುಕು ಬವಣೆ ಹಾಗೂ ಅನುಭವಗಳ ಸಾರವನ್ನು ಚಂದ್ರಪ್ಪ ಸೊಬಟಿ ಅವರು 2014ರಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹ ಕೇಂದ್ರವು ‘ಆತ್ಮಕಥನ’ವಾಗಿ ಪ್ರಕಟಿಸಿದೆ.