‘ಫೆ. 4ರಂದು ರಾತ್ರಿ ಹೇಮಂತ್ಗೆ ಕರೆ ಮಾಡಿದ್ದ ಕಿರಣ್, ಬಾಗಲಗುಂಟೆ ಬಳಿ ಕರೆಸಿಕೊಂಡಿದ್ದ. ಕಿರಣ್, ಅಕ್ಷಯ್ ಹಾಗೂ ಹೇಮಂತ್ ಒಟ್ಟಿಗೆ ಬಾರ್ಗೆ ಹೋಗಿ ಮದ್ಯ ಕುಡಿದಿದ್ದರು. ಬಾರ್ನಿಂದ ಹೊರಬಂದು, ಪಾಪಣ್ಣ ಬಡಾವಣೆಗೆ ಬಂದಿದ್ದರು. ‘ಪತ್ನಿ ಬಿಟ್ಟು ಹೋಗಲು ನೀನೇ ಕಾರಣ’ ಎಂದಿದ್ದ ಕಿರಣ್, ಅಕ್ಷಯ್ ಜೊತೆ ಸೇರಿ ಹೇಮಂತ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ’ ಎಂದು ಪೊಲೀಸರು ತಿಳಿಸಿದರು.