ವನ್ಯಜೀವಿಗಳಿಂದ ತಯಾರಿಸಿದ ಪದಾರ್ಥಗಳನ್ನು ಎಲ್ಲ ಧರ್ಮೀಯರೂ ಬಹಳ ವರ್ಷಗಳಿಂದ ಮಠ, ಮಂದಿರಗಳಲ್ಲಿ ಉಪಯೋಗಿಸುತ್ತಿದ್ದಾರೆ. ಸನ್ಯಾಸಿಗಳು ಶತಮಾನಗಳಿಂದ ಕೃಷ್ಣಾಜಿನ(ಜಿಂಕೆಯ ಚರ್ಮ) ಬಳಕೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಸಮುದಾಯಗಳಲ್ಲೂ ನವಿಲುಗರಿಯನ್ನು ಉಪಯೋಗಿಸುವುದು ರೂಢಿಯಲ್ಲಿದೆ. ಮೊಕದ್ದಮೆ ದಾಖಲಿಸಬೇಕಾದ ಸಂದರ್ಭ ಎದುರಾದರೂ ಅವರನ್ನು ಬಂಧಿಸುವ ಅವಶ್ಯಕತೆ ಇಲ್ಲ. ಏಕೆಂದರೆ ಆ ವ್ಯಕ್ತಿಗಳಿಗೆ ಅಪರಾಧ ಹಿನ್ನೆಲೆ ಇರುವುದಿಲ್ಲ. ತಪ್ಪಿಸಿಕೊಂಡು ಹೋಗುವ ಸಾಧ್ಯತೆಯೂ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.