‘ಗುಂಜೂರು ಪಾಳ್ಯದ ಅರಣ್ಯ ಪ್ರದೇಶದಲ್ಲಿ ಈ ಜಿಂಕೆಗಳಿವೆ. ಅವುಗಳಲ್ಲಿ ಒಂದು ನೀರು ಅಥವಾ ಆಹಾರ ಅರಸಿ ಅಲ್ಲಿಂದ ಹೊರಬಂದಿದೆ. ಜಿಂಕೆಗೆ ಸಣ್ಣ ಪ್ರಮಾಣದಲ್ಲಿ ತರಚಿದ ಗಾಯ ಬಿಟ್ಟರೆ ಯಾವುದೆ ರೀತಿಯ ಗಂಭೀರ ಗಾಯವಾಗಿಲ್ಲ. ತರಚಿದ್ದ ಗಾಯಕ್ಕೆ ಚಿಕಿತ್ಸೆ ನೀಡಿ, ಮರಳಿ ಅರಣ್ಯಕ್ಕೆ ಬಿಡಲಾಗಿದೆ’ ಎಂದು ವರ್ತೂರು ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.