ಜಲ ಜಾಗೃತಿ, ಜಲ ಸಾಕ್ಷರತೆ, ನೀರಿನ ಮಿತಬಳಕೆ ಮತ್ತು ಹಸಿರೀಕರಣ ಎಂಬ ಧ್ಯೇಯಗಳನ್ನು ಇಟ್ಟುಕೊಂಡು ಜಲ ಚಳವಳಿ ರೂಪಿಸುವುದು ‘ಜಲಾಮೃತ ಯೋಜನೆ’ಯ ಗುರಿ. ಸ್ಯಾಟ್ಲೈಟ್ ಚಿತ್ರಣ, ಪ್ರಾದೇಶಿಕ ಅಂಕಿ-ಅಂಶ, ಸ್ಥಳಾಕೃತಿ ಮತ್ತು ಭೌಗೋಳಿಕ ಅಧ್ಯಯನದ ಆಧಾರದ ಮೇಲೆ ನೀರಿನ ಆಯವ್ಯಯ ಮತ್ತು ಸಂರಕ್ಷಣೆಯನ್ನು ವೈಜ್ಞಾನಿಕ ವಿಧಾನಗಳ ಮೂಲಕ ಸಾಧಿಸಲಾಗುವುದು ಎಂದು ವಿವರಿಸಿದರು.