ನೀರಿನ ಪ್ರಾಮುಖ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ಜಲಮಂಡಳಿಯ ಜನಸ್ನೇಹಿ ಕಾರ್ಯಕ್ರಮಗಳು ಮತ್ತು ನೀರು ಸರಬರಾಜು, ಒಳಚರಂಡಿ ನಿರ್ವಹಣೆ, ನೀರು ಸಂರಕ್ಷಣೆ, ಮಳೆ ನೀರು ಸಂಗ್ರಹ ಮುಂತಾದ ಚಟುವಟಿಕೆಗೆ ಸಂಬಂಧಿಸಿ ಜಾಗೃತಿ ಮೂಡಿಸಲು ಸ್ವಯಂ ಸೇವಕರಾಗಿ ಕೆಲಸ ಮಾಡುವವರನ್ನು ಜಲಮಿತ್ರರನ್ನಾಗಿ ನೇಮಿಸುವ ಅಭಿಯಾನ ಇದಾಗಿದೆ. ಸಂಸ್ಕರಿಸಿದ ತ್ಯಾಜ್ಯ ನೀರಿನ ಮರುಬಳಕೆ, ಸಾರ್ವಜನಿಕರಿಂದ ನೀರು ವ್ಯರ್ಥವಾಗುವ ವಿವರಗಳನ್ನು ಸಂಗ್ರಹಿಸುವುದು, ಒಳಚರಂಡಿ ಸಮಸ್ಯೆಗಳು, ನೀರಿನ ಸಂಗ್ರಹ ಸಂಪ್ಗಳು ಮತ್ತು ಟ್ಯಾಂಕ್ಗಳಿಂದ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಯುವುದು. ಇದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಜಲಮಿತ್ರರ ಕರ್ತವ್ಯ ಎಂದು ತಿಳಿಸಿದರು.