ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್, ‘ವೀರಶೈವ ಮತ್ತು ಲಿಂಗಾಯತ ಧರ್ಮ ಎರಡೂ ಬೇರೆ ಬೇರೆ ಎಂಬ ಭಿನ್ನಾಭಿಪ್ರಾಯಗಳನ್ನು ಮೂಡಿಸುತ್ತಿರುವುದು ವಿಪರ್ಯಾಸದ ಸಂಗತಿ. ಇತರರು ನಮಗೆ ಕೆಡಕು ಬಯಸಲು ಬಂದಾಗ ಬಸವಣ್ಣನಂತೆ ತಲೆದೂಗಬಾರದು. ಒಗ್ಗಟ್ಟನ್ನು ಮೆರೆಯಬೇಕು. ವೇದಿಕೆ, ಜಾತಿ, ರಾಜಕಾರಣದ ಗಾಳಿಯನ್ನು ಸೋಕಿಸಿಕೊಳ್ಳದೆ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಬೇಕು’ ಎಂದು ಹೇಳಿದರು.