‘ಆತ್ಮಹತ್ಯೆ ಸಂಬಂಧ ದೂರು ನೀಡಿರುವ ಮಧುಸೂದನ್ ಅವರ ಪುತ್ರ ಅನೂಪ್, ‘ನನ್ನ ತಂದೆಗೆ ಬರಬೇಕಿದ್ದ ಆಸ್ತಿಯನ್ನು ಕೊಡಲು ದೊಡ್ಡಪ್ಪ ರವಿಪ್ರಸಾದ್ ಹಿಂದೇಟು ಹಾಕುತ್ತಿದ್ದರು. ಆ ಸಂಬಂಧ ಕಿರುಕುಳವನ್ನೂ ನೀಡುತ್ತಿದ್ದರು. ಅದೇ ಕಾರಣಕ್ಕೆ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ. ರವಿಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ವಿವರಿಸಿದರು.