ಬೆಂಗಳೂರು: ಕೆನರಾ ಬ್ಯಾಂಕ್ ಜೊತೆ ಅಮಾನತ್ ಸಹಕಾರ ಬ್ಯಾಂಕ್ ವಿಲೀನ ಗೊಳಿಸುವ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣದಿಂದ ತನ್ನನ್ನು ಕೈಬಿಡುವಂತೆ ಕೆನರಾ ಬ್ಯಾಂಕ್ ಕೋರಿದೆ. ಈ ಸಂಬಂಧ ಕೆನರಾ ಬ್ಯಾಂಕ್ ಪರ ವಕೀಲರು ಗುರುವಾರ ಹೈಕೋರ್ಟಿಗೆ ಜ್ಞಾಪನಾ ಪತ್ರ ಸಲ್ಲಿಸಿದರು.
ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ಪೀಠವು ಜ್ಞಾಪನಾ ಪತ್ರ ಸ್ವೀಕರಿಸಿ ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿತು.
ಹಾಜರಿ: ವಿಲೀನ ಪ್ರಕ್ರಿಯೆ ಪ್ರಶ್ನಿಸಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ಸಿ.ಕೆ. ಜಾಫರ್ ಷರೀಫ್ ಸೇರಿದಂತೆ ಅನೇಕ ರು ರಿಟ್ ಅರ್ಜಿ ಸಲ್ಲಿಸಿದ್ದರು. ಇದರಿಂದಾಗಿ ಅರ್ಜಿದಾರರು ವಿಚಾರಣೆಗೆ ಖುದ್ದು ಹಾಜರಾಗುವಂತೆ ನ್ಯಾಯಪೀಠವು ಕಳೆದ ವಿಚಾರಣೆ ವೇಳೆ ಸೂಚಿಸಿತ್ತು.
ಈ ಕಾರಣಕ್ಕಾಗಿ ಸಿ.ಕೆ. ಜಾಫರ್ ಷರೀಫ್ ಅವರು ಗುರುವಾರ ಇದೇ ನ್ಯಾಯಪೀಠದ ಮುಂದೆ ಹಾಜ ರಾಗಿದ್ದರು. ಬ್ಯಾಂಕಿನ ಶೇರುದಾರರೂ ಆಗಿರುವ ಜಾಫರ್ ಷರೀಫ್ ಅವರು ನ್ಯಾಯ ಪೀಠಕ್ಕೆ ತಮ್ಮ ಗುರುತಿನ ಚೀಟಿಯನ್ನು ಹಾಜರುಪಡಿಸಿದರು.