ನಗರದಲ್ಲಿ ಅಪರಾಧ ನಿಯಂತ್ರಣ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಮತ್ತು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿರ್ದೇಶನಗಳನ್ನೂ ಲೋಕಾಯುಕ್ತರು ನೀಡಿದ್ದಾರೆ. ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಎಸ್.ಬಿ.ಮಜಗೆ, ಸುಭಾಷ್ ಬಿ.ಅಡಿ, ಲೋಕಾ ಯುಕ್ತದ ರಿಜಿಸ್ಟ್ರಾರ್ ಎಚ್.ಆರ್.ದೇಶಪಾಂಡೆ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್. ಸತ್ಯನಾರಾಯಣ ರಾವ್ ಸಭೆಯಲ್ಲಿ ಹಾಜರಿದ್ದರು.