ಬೆಂಗಳೂರು: ಮಾನವ ಉತ್ಥಾನ ಸೇವಾ ಸಮಿತಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜನವರಿ 31ರಿಂದ ಎರಡು ದಿನ ಸದ್ಭಾವನಾ ಸಮ್ಮೇಳನ ಹಮ್ಮಿಕೊಂಡಿದೆ. ನಿತ್ಯ ಸಂಜೆ 4 ರಿಂದ 8 ಗಂಟೆಯವರೆಗೆ ನಡೆಯುವ ಈ ಸಮ್ಮೇಳನದಲ್ಲಿ ಸದ್ಗುರುದೇವ ಸತ್ಪಾಲ್ ಜೀ ಮಹಾರಾಜ ಅವರು ಪ್ರವಚನ ನೀಡಲಿದ್ದಾರೆ.
ಸಮ್ಮೇಳನದಲ್ಲಿ ಮಾತಾ ಅಮೃತಾಜೀ, ವಿಭೂಜೀ ಮಹಾರಾಜ್ ಸೇರಿದಂತೆ ಅನೇಕ ಸಂತರು ಪಾಲ್ಗೊಳ್ಳಲಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಮಿತಿಯ ಕಾರ್ಯದರ್ಶಿ ಡಾ.ವಿಜಯಕುಮಾರ್ ರೈ (9480514588) ಅವರನ್ನು ಸಂಪರ್ಕಿಸಬಹುದು.