‘ಆ್ಯಂಡ್ರೋಸ್ ಅವರ ಸ್ನೇಹಿತರ ವಿಚಾರಣೆಯಿಂದ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿತು. ಅದರಂತೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು. ಆ್ಯಂಡ್ರೋಸ್, ಆಟೊ ನಿಲ್ದಾಣದ ಇತರ ಆಟೊ ಚಾಲಕರನ್ನು ಬೆದರಿಸಿ ಪ್ರತಿ ತಿಂಗಳು ಹಫ್ತಾ ವಸೂಲಿ ಮಾಡುತ್ತಿದ್ದರು. ದಿನೇ ದಿನೇ ಅವರ ಉಪಟಳ ಹೆಚ್ಚಾಗಿತ್ತು. ಹೀಗಾಗಿ, ಹತ್ಯೆ ಮಾಡಿದೆವು’ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.