ಬಿಹಾರ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ಅಶೋಕ್ ಚೌಹಾಣ್, ದಿಲೀಪ್ ಚೌಹಾಣ್, ರಾಮಚಂದ್ರ ಭಾರ್ತಿ ಮತ್ತು ತನ್ವೀರ್ ಅಖ್ತರ್ ಪಕ್ಷ ತೊರೆದ ಕಾಂಗ್ರೆಸ್ ಸದಸ್ಯರು. ಜೆಡಿಯು–ಆರ್ಜೆಡಿ–ಕಾಂಗ್ರೆಸ್ ಮಹಾಮೈತ್ರಿ ಸರ್ಕಾರದಲ್ಲಿ ಅಶೋಕ್ ಚೌಹಾಣ್ ಶಿಕ್ಷಣ ಸಚಿವರಾಗಿದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ 67ನೇ ಜನ್ಮದಿನಾರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಈ ನಾಲ್ವರೂ ಜೆಡಿಯು ಸೇರಿದ್ದಾರೆ.