ಡಾ.ಅಂಬೇಡ್ಕರ್ ವೃತ್ತ ಸಮೀಪ ಸಿದ್ಧಿ ವಿನಾಯಕ ಹೋಟೆಲ್, ತಾಲ್ಲೂಕು ಪಂಚಾಯಿತಿ ಮುಂಭಾಗದ ಎಸ್ಬಿಐ ಎದುರು, ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಪ್ರತಾಪನಗರದ ಲಾಹೋಟಿ ಕಾರ್ ಶೋರೂಂ ಸಮೀಪದ ಮೈದಾನದಲ್ಲಿರುವ ಗುಡಿಸಲುಗಳಿಗೆ ರಾತ್ರಿ ಮಳೆ ನೀರು ನುಗ್ಗಿ ಆತಂಕ ಸೃಷ್ಟಿಸಿತು. ಗುಡಿಸಲು ನಿವಾಸಿಗಳು ಮಧ್ಯರಾತ್ರಿ ತಮ್ಮ ಪಾತ್ರೆಪಗಡೆಗಳೊಂದಿಗೆ ದೊಡ್ಡ ಕಟ್ಟಡದ ಮುಂಭಾಗದಲ್ಲಿ ಆಶ್ರಯ ಪಡೆಯಬೇಕಾಯಿತು.