‘ಹಲ್ಲು ಇದ್ದರೆ ಕಡಲೇ ಇಲ್ಲ, ಕಡಲೆ ಇದ್ದರೆ ಹಲ್ಲು ಇಲ್ಲ ಎಂಬಂತಾಗಿದೆ. ಕಮಲನಗರ ತಾಲ್ಲೂಕಿನ ವ್ಯವಸ್ಥೆ. ನೂತನ ತಾಲ್ಲೂಕು ಘೋಷಣೆಯಾಗಿದ್ದು ತಹಶೀಲ್ದಾರ್ ಕಚೇರಿ, ತಾಲ್ಲೂಕಾ ಪಂಚಾಯತ್ ಕಚೇರಿಗಳಿಗೆ ಸ್ವಂತ ಕಟ್ಟಡ ಇರದಿದ್ದರೂ ಅಧಿಕಾರಿಗಳು ಕೆಲಸ ಸುಗಮವಾಗಿ ನಡೆಸುತ್ತಿದ್ದಾರೆ. ಬೇರೆ ಕಟ್ಟಡಗಳಲ್ಲಿ ತಾತ್ಕಾಲಿಕವಾಗಿ ಕಚೇರಿ ತೆರೆದಿದ್ದಾರೆ. ಆದರೆ ಸಮಾಜಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಿದ ಈ ಕಟ್ಟಡ ಖಾಲಿ ಬಿದ್ದಿದೆ.