‘ಉಪತಹಶೀಲ್ದಾರ್ ಸಿ.ಪುಷ್ಪಾವತಿ ಅವರು ಪಿಂಚಣಿ ಕಡತಗಳಲ್ಲಿ ಕಾರ್ಯ ವಿಧಾನ ಲೋಪ ಮಾಡಿ, ಮದ್ದೂರು, ಕೆ.ಹೊಸೂರು, ಕೆಸ್ತೂರು, ಬಸಾಪುರ, ಆಲ್ಕೆರೆ ಅಗ್ರಹಾರ, ಮಲಾರಪಾಳ್ಯ, ಕಿನಕಳ್ಳಿ, ಅಗರ, ಮಲ್ಲಿಗೆಹಳ್ಳಿ, ಗೌಡಹಳ್ಳಿ, ಗಣಿಗನೂರು ಗ್ರಾಮಗಳ ಅನರ್ಹರಿಗೆ ವೃದ್ಧಾಪ್ಯ ವೇತನ ಮಂಜೂರು ಮಾಡಿ ₹2,53,200 ರಷ್ಟು ಆರ್ಥಿಕ ನಷ್ಟ ಉಂಟಾಗಲು ಕಾರಣರಾಗಿದ್ದಾರೆ. ನೋಟಿಸ್ಗೆ ಪುಷ್ಪಾವತಿ ನೀಡಿರುವ ಸಮಜಾಯಿಷಿ ಸಮರ್ಪಕವಾಗಿ ಇಲ್ಲದ ಕಾರಣ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್ ಅವರು ಮಂಗಳವಾರ ಹೊರಡಿಸಿರುವ ಆದೇಶದಲ್ಲಿ ಹೇಳಿದ್ದಾರೆ.