ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಶ್ರೀನಿವಾಸ ಪ್ರಸಾದ್ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ. ಮುಖಂಡರ ನಡವಳಿಕೆಯಿಂದ ಅವರು ಬೇಸರಗೊಂಡಿದ್ದರು. ವಿಧಾನಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಅವರ ಅಭಿಪ್ರಾಯ ಕೇಳಿರಲಿಲ್ಲ. ನಿವೃತ್ತಿಯ ನಂತರವೂ ಸರಿಯಾಗಿ ಮಾತನಾಡಿಸಲಿಲ್ಲ. ಅವರ ಮಾತಿಗೂ ಪಕ್ಷದಲ್ಲಿ ಮನ್ನಣೆ ಇರಲಿಲ್ಲ. ಅವರು ಮತ್ತು ನಾವೆಲ್ಲ ದೈಹಿಕವಾಗಿ ಬಿಜೆಪಿಯಲ್ಲಿ ಇದ್ದೆವೆಯೇ ವಿನಾ ಮಾನಸಿಕವಾಗಿ ಇರಲಿಲ್ಲ’ ಎಂದು ಹೇಳಿದರು.