‘ರಾಜ್ಯ ಸಮ್ಮೇಳನ ಇದೇ 29 ಮತ್ತು 30ರಂದು ರಾಯಚೂರಿನಲ್ಲಿ ಸಮಾವೇಶಗೊಳ್ಳಲಿದೆ. ಜಿಲ್ಲೆಯ 100 ವಿಜ್ಞಾನ ಆಸಕ್ತರು, ಶಿಕ್ಷಕರು ಮತ್ತು ಚಿಂತಕರು ಸಮ್ಮೇಳನಕ್ಕೆ ತೆರಳುತ್ತಿದ್ದಾರೆ. ಉಚಿತ ಬ್ಯಾಗ್ ಮತ್ತು ಮತ್ತಿತರ ಪರಿಕರ ಪಡೆಯಲು ಇಚ್ಚಿಸುವವರು ಪರಿಷತ್ ನಿಗಧಿ ಪಡಿಸಿರುವ ಹಣವನ್ನು ಭರಿಸಬೇಕು. ಮುಂಚಿತವಾಗಿ ಹೆಸರು ನೋಂದಾಯಿಸಿಕೊಂಡವರಿಗೆ ಕೊಠಡಿ ಕಾಯ್ದಿರಿಸುವಿಕೆ ಮತ್ತು ಭೋಜನ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ಹೇಳಿದರು.