ನರೇಗಾ ತಾಲ್ಲೂಕು ಕಾರ್ಯಕ್ರಮಾಧಿಕಾರಿ ನಾರಾಯಣ ಮಾತನಾಡಿ, ‘ಪಂಚಾಯಿತಿ ವ್ಯಾಪ್ತಿಗೆ ಮಂಗಲಹೊಸೂರು, ಕರಡಿಮೋಳೆ, ಯಡಿಯೂರು, ಹುಲ್ಲೇಪುರ, ಮಹಾತಾಳಪುರ, ಮಂಗಲ ಗ್ರಾಮಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಆಟದ ಮೈದಾನ ಅಭಿವೃದ್ದಿ, ಶೌಚಾಲಯ, ಚರಂಡಿ, ರಸ್ತೆ, ಸೆಸ್ಕ್, ಜಮೀನು ಅಭಿವೃದ್ಧಿ ಸೇರಿ 60ಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ನಡೆದಿರುವ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ’ ಎಂದು ತಿಳಿಸಿದರು.