ಸಂಜೆ ಉತ್ಸವ ಮೂರ್ತಿಯನ್ನು ಬಗೆಬಗೆ ಹೂ ಹಾರಗಳಿಂದ ಸಿಂಗರಿಸಿ, ಗಂಧ, ಕುಂಕುಮಾರ್ಚನೆ ನೆರವೇರಿಸಿ, ತೆಪ್ಪೋತ್ಸವಕ್ಕೆ ಆಗಮಿಕರು ಚಾಲನೆ ನೀಡಿದರು. ಈ ಸಮಯದಲ್ಲಿ ಆಗಮಿಸಿದ್ದ ಭಕ್ತರು ಮತ್ತು ಸೋಲಿಗರು ರಂಗನಾಥನ ಗುಣಗಾನ ಮಾಡಿದರು. ದಾಸರು ಶಂಖ, ಜಾಗಟೆ ಬಡಿದು ಗೋವಿಂದನನ್ನು ಸ್ಮರಿಸಿದರು. ಹರಕೆ ಹೊತ್ತವರು ಕರ್ಪೂರ ಹಾಗೂ ಊದಿನಕಡ್ಡಿ ಬೆಳಗಿಸಿ ಬನದ ತುಂಬ ಸುವಾಸನೆ ತುಂಬಿದರು.