ಕೆಂಪು ಮೂಲಂಗಿಯಲ್ಲಿ ಕಂಡು ಬರುವ ಹೇರಳವಾದ ವಿಟಮಿನ್ ಸಿ, ವಿಟಮಿನ್ ಬಿ9, ನಾರಿನ ಅಂಶ, ಪೊಟ್ಯಾಶಿಯಂ ಅಂಶ ಮತ್ತು ಮ್ಯಾಗ್ನಿಷಿಯಂ ಅಂಶ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಸದಾ ಚುರುಕಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ನರ ಮಂಡಲದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡುತ್ತದೆ. ಸಾಧಾರಣವಾಗಿ ನಾವು ಪ್ರತಿ ದಿನ ಸೇವಿಸುವ ಎಲ್ಲ ಬಗೆಯ ತರಕಾರಿಗಳಲ್ಲಿ ಸಲ್ಫರ್ ಅಂಶ ಕಂಡು ಬರುವುದಿಲ್ಲ. ಆದರೆ ಮೂಲಂಗಿಗಳಲ್ಲಿ ಸಲ್ಫರ್ ಅಂಶ ಇರುವುದರಿಂದ ಹೊಟ್ಟೆ ಹಸಿವು ಹೆಚ್ಚಾಗಿ ಸದಾ ತಾಜಾ ಆಹಾರ ಸೇವಿಸಲು ಪ್ರೇರೇಪಿಸುತ್ತದೆ.