ಜಿಲ್ಲೆಯ ಬಯಲು ಸೀಮೆಯ ತರೀಕೆರೆ, ಅಜ್ಜಂಪುರ ತಾಲ್ಲೂಕಿನಲ್ಲಿ ಅಡಿಕೆ ಬೆಳೆ ಈಗ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಹೊಲ–ಗದ್ದೆಗಳೆಲ್ಲವೂ ಅಡಿಕೆ ತೋಟವಾಗಿ ಮಾರ್ಪಟ್ಟಿವೆ. ವಾಡಿಕೆಯಷ್ಟು ಮಳೆಯಾಗುತ್ತಿದ್ದಾಗ ಯಾವುದೇ ತೊಂದರೆ ಇಲ್ಲದೆ ತೋಟಗಳಿಗೆ ಬೇಸಿಗೆಯಲ್ಲೂ ನೀರು ಪೂರೈಕೆಯಾಗುತ್ತಿತ್ತು. ಆದರೆ, ಈ ವರ್ಷ ಮಳೆ ಕೊರತೆಯಾಗಿದ್ದು, ಅಂತರ್ಜಲ ಕುಸಿದಿದೆ.